2 ಥೆಸಲೋನಿಕದವರಿಗೆ
ಗ್ರಂಥಕರ್ತೃತ್ವ
1 ಥೆಸಲೋನಿಕದಂತೆ, ಈ ಪತ್ರಿಕೆಯು ಪೌಲ, ಸೀಲ ಮತ್ತು ತಿಮೊಥೆಯರಿಂದ ಬರೆಯಲ್ಪಟ್ಟದ್ದಾಗಿದೆ. ಈ ಪತ್ರಿಕೆಯ ಗ್ರಂಥಕರ್ತನು 1 ಥೆಸಲೋನಿಕದಲ್ಲಿರುವ ಮತ್ತು ಪೌಲನು ಬರೆದ ಇತರ ಪತ್ರಿಕೆಗಳಲ್ಲಿರುವಂತಹ ಅದೇ ಶೈಲಿಯನ್ನು ಬಳಸಿದ್ದಾನೆ. ಇದು ಪೌಲನೇ ಮುಖ್ಯ ಗ್ರಂಥಕರ್ತನು ಎಂದು ತೋರಿಸುತ್ತದೆ. ಸೀಲ ಮತ್ತು ತಿಮೊಥೆಯರು ವಂದನೆ ಭಾಗದಲ್ಲಿ ಸೇರ್ಪಡೆಗೊಂಡಿದ್ದಾರೆ (2 ಥೆಸ. 1:1). ಅನೇಕ ವಚನಗಳಲ್ಲಿ, ನಾವು ಬರೆಯುತ್ತೇವೆ ಎಂಬ ವಿಷಯವು, ಅವರು ಮೂವರು ಒಪ್ಪಿಗೆಯನ್ನು ಸೂಚಿಸಿದ್ದಾರೆ ಎಂಬುದನ್ನು ತೋರಿಸುತ್ತದೆ. ಪೌಲನ ಅಂತಿಮ ವಂದನೆ ಮತ್ತು ಪ್ರಾರ್ಥನೆಯನ್ನು ಬರೆದಿರುವುದರಿಂದ ಕೈಬರಹವು ಅವನದಲ್ಲ (2 ಥೆಸ. 3:17). ಈ ಪತ್ರಿಕೆಯನ್ನು ಪೌಲನು ತಿಮೊಥೆಗೆ ಅಥವಾ ಸೀಲನಿಗೆ ಹೇಳಿ ಬರೆಯಿಸಿರುವುದು ಎಂದು ತೋರುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 51-52 ರ ನಡುವೆ ಬರೆಯಲ್ಪಟ್ಟಿದೆ.
1 ಥೆಸಲೋನಿಕದವರಿಗೆ ಬರೆದ ಪತ್ರಿಕೆಯನ್ನು ಬರೆದಂತಹ ಸ್ಥಳವಾದ ಕೊರಿಂಥದಲ್ಲಿಯೇ 2 ಥೆಸಲೋನಿಕದವರಿಗೆ ಬರೆದ ಪತ್ರಿಕೆಯನ್ನು ಪೌಲನು ಬರೆದನು.
ಸ್ವೀಕೃತದಾರರು
2 ಥೆಸ. 1:1 ರ ಪ್ರಕಾರ ಥೆಸಲೋನಿಕದವರಿಗೆ ಬರೆದ ಪತ್ರಿಕೆಯ ಉದ್ದೇಶಿತ ಓದುಗರು “ಥೆಸಲೋನಿಕದ ಸಭೆಯ” ಸದಸ್ಯರಾಗಿದ್ದಾರೆ.
ಉದ್ದೇಶ
ಕರ್ತನ ದಿನದ ಕುರಿತಾದ ಸೈದ್ಧಾಂತಿಕ ದೋಷವನ್ನು ಸರಿಪಡಿಸುವುದು ಇದರ ಉದ್ದೇಶವಾಗಿತ್ತು. ವಿಶ್ವಾಸಿಗಳನ್ನು ಪ್ರಶಂಸಿಸಲು ಮತ್ತು ನಂಬಿಕೆಯಲ್ಲಿನ ಅವರ ದೃಢನಿಷ್ಠೆಕ್ಕಾಗಿ ಅವರನ್ನು ಪ್ರೋತ್ಸಾಹಿಸಲು ಮತ್ತು ಅವರ ಅಂತಿಮಗತಿಶಾಸ್ತ್ರದ ಸ್ವಯಂ ವಂಚನೆಯ ನಿಮಿತ್ತ, ಕರ್ತನ ದಿನವು ಬಂದಿರುವುದರಿಂದ ಕರ್ತನ ಪುನರಾಗಮನವು ಶೀಘ್ರದಲ್ಲೇ ಉಂಟಾಗುತ್ತದೆ ಎಂದು ನಂಬಿದಂಥವರನ್ನು ಮತ್ತು ಈ ಸಿದ್ಧಾಂತವನ್ನು ತಮ್ಮ ಸ್ವಂತ ಲಾಭಕ್ಕಾಗಿ ದುರ್ಪಯೋಗ ಮಾಡಿಕೊಂಡವರನ್ನು ಗದರಿಸುವುದಕ್ಕಾಗಿ ಬರೆದನು.
ಮುಖ್ಯಾಂಶ
ನಿರೀಕ್ಷೆಯಲ್ಲಿ ಜೀವಿಸುವುದು
ಪರಿವಿಡಿ
1. ವಂದನೆ — 1:1-2
2. ಸಂಕಷ್ಟದಲ್ಲಿ ಸಾಂತ್ವನ — 1:3-12
3. ಕರ್ತನ ದಿನಕ್ಕೆ ಸಂಬಂಧಿಸಿದಂತೆ ಸರಿಪಡಿಸುವಿಕೆ — 2:1-12
4. ಅವರ ಅಂತ್ಯಾವಸ್ಥೆಗೆ ಸಂಬಂಧಿಸಿದ ಜ್ಞಾಪನೆ — 2:13-17
5. ಪ್ರಾಯೋಗಿಕ ವಿಷಯಗಳ ಬಗ್ಗೆ ಪ್ರಬೋಧನೆಗಳು — 3:1-15
6. ಅಂತಿಮ ವಂದನೆಗಳು — 3:16-18