ಹಗ್ಗಾಯನು
ಗ್ರಂಥಕರ್ತೃತ್ವ
ಹಗ್ಗಾಯ 1:1 ರಲ್ಲಿ ಪ್ರವಾದಿಯಾದ ಹಗ್ಗಾಯನನ್ನು ಹಗ್ಗಾಯನ ಗ್ರಂಥದ ಗ್ರಂಥಕರ್ತನೆಂದು ಗುರುತಿಸಲಾಗಿದೆ. ಪ್ರವಾದಿಯಾದ ಹಗ್ಗಾಯನು ತನ್ನ ನಾಲ್ಕು ಸಂದೇಶಗಳನ್ನು ಯೆರೂಸಲೇಮಿನ ಯೆಹೂದ್ಯ ಜನರಿಗಾಗಿ ಬರೆದಿಟ್ಟಿದ್ದಾನೆ. ಹಗ್ಗಾಯ 2:3 ನೇ ವಚನವು ಪ್ರವಾದಿಯು ದೇವಾಲಯದ ನಾಶಕ್ಕೂ ಮತ್ತು ಸೆರೆವಾಸಕ್ಕೂ ಮುಂಚಿನ ಯೆರೂಸಲೇಮನ್ನು ನೋಡಿದ್ದಾನೆ ಎಂದು ಸೂಚಿಸುತ್ತದೆ, ಅಂದರೆ ಅವನು ತನ್ನ ರಾಷ್ಟ್ರದ ವೈಭವಗಳನ್ನು ಹಿಂದಿರುಗಿ ನೋಡುತ್ತಿರುವಂಥ ಹಿರಿಯ ಮನುಷ್ಯನಾಗಿದ್ದಾನೆ, ಪ್ರವಾದಿಯು ತನ್ನ ಜನರು ಸೆರೆವಾಸದ ಬೂದಿಯಿಂದ ಮೇಲೆದ್ದು ಬರುವುದನ್ನು ಮತ್ತು ರಾಷ್ಟ್ರಗಳಿಗೆ ದೇವರ ಬೆಳಕಾಗಿರುವ ತಮ್ಮ ಹಕ್ಕುಳ್ಳ ಸ್ಥಾನವನ್ನು ಮರಳಿಪಡೆದುಕೊಳ್ಳುವುದನ್ನು ಕಾಣಲು ಭಾವೋದ್ರಿಕ್ತ ಬಯಕೆಯಿಂದ ತುಂಬಲ್ಪಟ್ಟನು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 520 ರ ಕಾಲದಲ್ಲಿ ಬರೆದಿರಬಹುದು.
ಇದು ಸೆರೆವಾಸದ ನಂತರ ಬರೆದಿರುವ ಪುಸ್ತಕವಾಗಿದೆ, ಅಂದರೆ ಬಾಬಿಲೋನಿನಲ್ಲಿನ ಸೆರೆಯ (ಸೆರೆವಾಸ) ನಂತರ ಬರೆಯಲಾಗಿದೆ.
ಸ್ವೀಕೃತದಾರರು
ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಜನರು ಮತ್ತು ಸೆರೆವಾಸದಿಂದ ಹಿಂದಿರುಗಿದವರು.
ಉದ್ದೇಶ
ಸ್ವಂತ ನಾಡಿಗೆ ಹಿಂದಿರುಗಿದರ ಸಂತೃಪ್ತಿಯ ಸ್ಥಿತಿಯಿಂದ ಹೊರಬಂದು ದೇವಾಲಯದ ಪುನರ್ನಿರ್ಮಾಣವನ್ನು ಮತ್ತು ಆರಾಧನೆಯನ್ನು ರಾಷ್ಟ್ರದ ಮುಖ್ಯ ಗುರಿಯಾಗಿಸಲು ಪ್ರಯತ್ನ ಮಾಡುವ ಮೂಲಕ ನಂಬಿಕೆಯನ್ನು ವ್ಯಕ್ತಪಡಿಸುವುದಕ್ಕೆ ಹಿಂದಿರುಗಿದ ಅವಶೇಷ ಜನಸಮುದಾಯವನ್ನು ಪ್ರೋತ್ಸಾಹಿಸಲು, ಅವರು ದೇವಾಲಯವನ್ನು ಪುನರ್ನಿರ್ಮಿಸುವ ಕಡೆಗೆ ಸಾಗುವಾಗ ಯೆಹೋವನು ಅವರನ್ನು ಮತ್ತು ನಾಡನ್ನು ಆಶೀರ್ವದಿಸುವನು ಎಂದು ಅವರನ್ನು ಪ್ರೋತ್ಸಾಹಿಸಲು, ಅವರ ಹಿಂದಿನ ತಿರುಗಿ ಬೀಳುವಿಕೆಯ ಹೊರತಾಗಿಯೂ ಯೆಹೋವನು ಅವರಿಗಾಗಿ ಭವಿಷ್ಯದಲ್ಲಿ ಮಹತ್ವದ ಸ್ಥಾನಮಾನವನ್ನು ಇಟ್ಟಿದ್ದಾನೆ ಎಂದು ಹಿಂದಿರುಗಿದ ಅವಶೇಷ ಜನಸಮುದಾಯವನ್ನು ಪ್ರೋತ್ಸಾಹಿಸಲು.
ಮುಖ್ಯಾಂಶ
ದೇವಾಲಯದ ಪುನರ್ನಿರ್ಮಾಣ
ಪರಿವಿಡಿ
1. ದೇವಾಲಯದ ನಿರ್ಮಾಣಕ್ಕೆ ಕರೆ — 1:1-15
2. ಕರ್ತನಲ್ಲಿ ಧೈರ್ಯ — 2:1-9
3. ಜೀವನದ ಶುದ್ಧತೆಗಾಗಿ ಕರೆ — 2:10-19
4. ಭವಿಷ್ಯದ ಕುರಿತಾಗಿರುವ ಆತ್ಮವಿಶ್ವಾಸಕ್ಕಾಗಿ ಕರೆ — 2:20-23