ಎಸ್ತೇರಳು
ಗ್ರಂಥಕರ್ತೃತ್ವ
ಎಸ್ತೇರಳ ಪುಸ್ತಕದ ಅಜ್ಞಾತ ಗ್ರಂಥಕರ್ತನು ಪರ್ಷಿಯಾದ ರಾಜ ಆಸ್ಥಾನದ ಬಗ್ಗೆ ಚೆನ್ನಾಗಿ ತಿಳಿದಿರುವ ಯೆಹೂದ್ಯನಾಗಿದ್ದಾನೆ. ರಾಜನ ಆಸ್ಥಾನದ ಜೀವನ ಮತ್ತು ಸಂಪ್ರದಾಯಗಳ ವಿವರವಾದ ವಿವರಣೆಗಳು, ಪುಸ್ತಕದಲ್ಲಿ ಸಂಭವಿಸಿದ ಘಟನೆಗಳು ಪ್ರತ್ಯಕ್ಷದರ್ಶಿಯಾದ ಗ್ರಂಥಕರ್ತನನ್ನು ಸೂಚಿಸುತ್ತವೆ. ಜೆರುಬ್ಬಾಬೆಲನ ಮುಂದಾಳತ್ವದಲ್ಲಿ ಯೆಹೂದಕ್ಕೆ ಹಿಂದಿರುಗಿದ ಉಳಿದ ಜನರಿಗಾಗಿ ಬರೆದಿರುವ ಅವನು ಯೆಹೂದ್ಯನು ಎಂದು ಪಂಡಿತರು ನಂಬುತ್ತಾರೆ. ಸ್ವತಃ ಮೊರ್ದೆಕೈ ಗ್ರಂಥಕರ್ತನೆಂದು ಕೆಲವರು ಸೂಚಿಸಿದ್ದಾರೆ, ಆದರೆ ಪುಸ್ತಕದಲ್ಲಿ ಕಂಡುಬರುವ ಅವನ ಪುರಸ್ಕಾರಗಳು ಅವನ ಕಿರಿಯ ಸಮಕಾಲೀನವರಲ್ಲಿ ಒಬ್ಬನು ಗ್ರಂಥಕರ್ತನಾಗಿದ್ದಾನೆ ಎಂದು ಸೂಚಿಸುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 464-331 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಪರ್ಷಿಯಾದ ಅರಸನಾದ ಅಹಷ್ವೇರೋಷ I ಆಳ್ವಿಕೆಯ ಅವಧಿಯಲ್ಲಿ ಈ ಕಥೆಯು, ಮುಖ್ಯವಾಗಿ ಪರ್ಷಿಯಾ ಸಾಮ್ರಾಜ್ಯದ ರಾಜಧಾನಿಯಾಗಿರುವ ಶೂಷನಲ್ಲಿರುವ ರಾಜನ ಅರಮನೆಯಲ್ಲಿ ನಡೆಯುತ್ತದೆ.
ಸ್ವೀಕೃತದಾರರು
ಚೀಟಿನ ಅಥವಾ ಪೂರೀಮ್ ಹಬ್ಬದ ಮೂಲವನ್ನು ದಾಖಲಿಸಲು ಎಸ್ತೇರಳ ಪುಸ್ತಕವನ್ನು ಯೆಹೂದ್ಯ ಜನರಿಗೆ ಬರೆಯಲಾಯಿತು. ಈ ವಾರ್ಷಿಕ ಹಬ್ಬವು ದೇವರು ಯೆಹೂದ್ಯ ಜನರನ್ನು ರಕ್ಷಿಸಿದ್ದನ್ನು ನೆನಪಿಸುತ್ತದೆ, ಇದು ಐಗುಪ್ತದ ದಾಸತ್ವದಿಂದ ಉಂಟಾದ ಅವರ ಬಿಡುಗಡೆಗೆ ಸದೃಶವಾಗಿದೆ.
ಉದ್ದೇಶ
ಮನುಷ್ಯನ ಇಚ್ಛೆಯೊಂದಿಗಿನ ದೇವರ ಸಂವಹನವನ್ನು, ಜನಾಂಗೀಯ ಹಗೆತನದೊಂದಿಗಿನ ಆತನ ದ್ವೇಷವನ್ನು, ಅಪಾಯದ ಕಾಲದಲ್ಲಿ ಜ್ಞಾನವನ್ನು ಮತ್ತು ಸಹಾಯವನ್ನು ನೀಡುವ ಆತನ ಶಕ್ತಿಯನ್ನು ತೋರಿಸುವುದು ಈ ಪುಸ್ತಕದ ಉದ್ದೇಶವಾಗಿದೆ. ದೇವರ ಹಸ್ತವು ಆತನ ಜನರ ಜೀವನದಲ್ಲಿ ಸಕ್ರಿಯವಾಗಿದೆ. ಆತನು ಎಸ್ತೇರಳ ಜೀವನದಲ್ಲಿನ ಸಂದರ್ಭಗಳನ್ನು ಉಪಯೋಗಿಸಿದ್ದನು, ಆತನು ಮನುಷ್ಯರೆಲ್ಲರ ನಿರ್ಧಾರಗಳನ್ನು ಮತ್ತು ಕಾರ್ಯಗಳನ್ನು ಪ್ರಾಸಂಗಿಕವಾಗಿ ತನ್ನ ದೈವಿಕ ಯೋಜನೆಗಳು ಮತ್ತು ಉದ್ದೇಶಗಳನ್ನು ನೆರವೇರಿಸಲು ಉಪಯೋಗಿಸುತ್ತಾನೆ. ಎಸ್ತೇರಳ ಪುಸ್ತಕವು ಪೂರೀಮ್ ಹಬ್ಬದ ಆಚಾರವನ್ನು ದಾಖಲಿಸುತ್ತದೆ ಮತ್ತು ಈಗಲೂ ಯೆಹೂದ್ಯರು ಪೂರೀಮ್ ಸಮಯದಲ್ಲಿ ಎಸ್ತೇರಳ ಪುಸ್ತಕವನ್ನು ಓದುತ್ತಾರೆ.
ಮುಖ್ಯಾಂಶ
ಸಂರಕ್ಷಣೆ
ಪರಿವಿಡಿ
1. ಎಸ್ತೇರಳು ರಾಣಿ ಆಗಿದ್ದು — 1:1-2:23
2. ದೇವರ ಯೆಹೂದ್ಯರಿಗೆ ಅಪಾಯ — 3:1-15
3. ಎಸ್ತೇರಳು ಮತ್ತು ಮೊರ್ದೆಕೈಯು ಕ್ರಮ ಕೈಗೊಂಡಿದ್ದು — 4:1-5:14
4. ಯೆಹೂದ್ಯರ ಬಿಡುಗಡೆ — 6:1-10:3